July 14, 2016



February 6, 2015

ಹಸಿವು ಮತ್ತು ಕಳ್ಳತನ



ಅಮವಾಸ್ಸೆ ಕತ್ತಲು, ಹಟ್ಟಿಯೆಲ್ಲ ಬರಿದು
ಹಸಿದ
ಹೊಟ್ಟೆಗಳು
ಊರಾಚೆ ಗೌಡನ ಹೊಲದ ಕಡ್ಲೆಕಾಯಿ ಗಿಡಗಳ
ಹಾದಿ ಹಿಡಿದು ಹೊರಟವು;
ಕತ್ತಲಲ್ಲಿ ತಡಕಿ, ಹುಡುಕಿ
ಕಡ್ಲೆಕಾಯಿ ಗಿಡಗಳ ಕಿತ್ತು ತಂದವು
ಹಟ್ಟಿಯೊಳಗೆ  ಹಸಿವು ನೀಗುವ ಸಂಭ್ರಮದಲ್ಲೇ
ನುಗ್ಗಿ ಬಂದವು ಗೌಡನ ಆಳುಗಳು
ಹಟ್ಟಿಯನ್ನೆಲ್ಲಾ ಕೆಡವಿ, ಕೊಡವಿ
ಸುಲಿದ ಬೀಜ, ಬಿಡಿಸಿದ ಕಡಲೆಕಾಯಿ,
ತಿನ್ನುತ್ತಿದ್ದ ಬಾಯಿಗಳಿಂದ ಕಸಿದು,  ಹೊಡೆದು ಬಡಿದು
ಎಳೆದೊಯ್ದರು ಪೋಲೀಸ್ ಸ್ಟೇಷನ್ನಿಗೆ
ಅಲ್ಲಿಂದ ಮುಂದೆ ಕೋರ್ಟಿಗೆ
ಜಡ್ಜ್ ಸಾಹೇಬರು ಕೇಳಿದರು
ಏನ್ರಪ್ಪಾ
ಕಡಲೆಕಾಯಿ ಕದ್ರಂತೆ ಹೌದಾ?
ಸ್ವಾಮಿ,  ನಾವಲ್ಲ,..;  ಹಸಿವು,  
 ಹಸಿವು ನಮ್ಮದಲ್ಲ, ಕದ್ದವರು ನಾವಲ್ಲ
ನಮ್ಮನ್ನು ಬಿಡಿ, ನಾವು ಅಮಾಯಕರು...
_____________________________________
                        -  ಭಾಸ್ಕರ್ ನರಸಿಂಹಯ್ಯ

November 14, 2013

ಇಳಿಸಂಜೆ,
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
---------------------------------------
~ ಎನ್. ಭಾಸ್ಕರ್


The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.
ಅರಿವಿನ ಇರವ ತಾನರಿಯಲದು ಅರಿದಿಹುದು
ಅರಿವಿನಾ ತೆರನ ಅರಿಯುವಡೆ ತಾ ತನ್ನ
ಅರಿಯದನರಿಯ ಸರ್ವಜ್ಞ

Unless you know yourself, there is no way would you know the ways of Consciousness. Sarvgna.
-------------------------
English
meaning: N Bhaskar
ಸತ್ಯದ
ಮುಖವಾಡ
ಬಿದ್ದರೆ
ಸುಳ್ಳಾದೀತೆ?

ತೊಳೆದ
ಕನ್ನಡಿಯಂತೆ
ತೊಳೆದಷ್ಟೂ
ಹೊಳಪು !

ಪುಟಕ್ಕಿಟ್ಟ
ಹೊನ್ನಿನಂತೆ
ಬೆಂದಷ್ಟೂ
ಹೊಳಪು

ಸೌಂದರ್ಯ
ಅಂತರಂಗದ
ಸೌಂದರ್ಯ
ತೊಯ್ದಷ್ಟೂ ಸ್ನಿಗ್ಧ,

ಸುಂದರ !
---------------
~ ಎನ್. ಭಾಸ್ಕರ್
ಬದುಕ
ಹಾದಿಯೇ ಹಾಗೆ;
ಕ್ಷಣ ಕ್ಷಣವೂ
ಅನುಭವ
ಸಿಹಿಯ ಅಂತರಾಳದ ಕಹಿ
ಕಹಿಯ ತಿರುಳ ಸಿಹಿ
ಕಡೆಗೆ
ಕಹಿಯಲ್ಲದ ಕಹಿ
ಸಿಹಿಯಲ್ಲದ ಸಿಹಿ
ಎಲ್ಲವೂ ಒಂದೇ
ತೆರನಾದ
ಅನುಭಾವ
---------------------
~ ಎನ್. ಭಾಸ್ಕರ್